ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜ ಮತ್ತು ಪೂನಮ್ ಯಾದವ್ ಅವರ ಹೆಸರುಗಳನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜ ಮತ್ತು ಪೂನಮ್ ಯಾದವ್ ಅವರ ಹೆಸರುಗಳನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಏಪ್ರೀಲ್ 27 ರ ಶನಿವಾರ ನಡೆದ ಆಡಳಿತಾಧಿಕಾರಿಗಳ (ಸಿಒಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
25 ವರ್ಷ ವಯಸ್ಸಿನ ಬೂಮ್ರಾ, ಮೂರು ಮಾದರಿಗಳಲ್ಲೂ (ಟೆಸ್ಟ್, ಏಕದಿನ ಮತ್ತು ಟ್ವೆಂಟಿ–20) ಭಾರತ ತಂಡದ ಸದಸ್ಯರಾಗಿದ್ದಾರೆ. ವಿಶ್ವಕಪ್ ತಂಡದಲ್ಲೂ ಸ್ಥಾನ ಗಳಿಸಿದ್ದಾರೆ. 49 ಏಕದಿನ ಪಂದ್ಯಗಳನ್ನು ಆಡಿರುವ ಅವರು 22.15ರ ಸರಾಸರಿಯಲ್ಲಿ 85 ವಿಕೆಟ್ ಕಬಳಿಸಿದ್ದಾರೆ. 42 ಟ್ವೆಂಟಿ–20 ಪಂದ್ಯಗಳಿಂದ 51 ವಿಕೆಟ್ ಉರುಳಿಸಿದ್ದಾರೆ. 10 ಟೆಸ್ಟ್ ಆಡಿರುವ ಅವರ ಖಾತೆಯಲ್ಲಿ 49 ವಿಕೆಟ್ಗಳು ಇವೆ.
27 ವರ್ಷದ ಲೆಗ್ಸ್ಪಿನ್ನರ್ ಪೂನಮ್ ಕೂಡಾ ಅಮೋಘ ಸಾಧನೆ ಮಾಡಿದ್ದಾರೆ. 41 ಏಕದಿನ ಪಂದ್ಯಗಳನ್ನು ಆಡಿರುವ ಅವರು ಒಟ್ಟು 63 ವಿಕೆಟ್ ಉರುಳಿಸಿದ್ದಾರೆ. 54 ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ಅವರ ಖಾತೆಯಲ್ಲಿ 74 ವಿಕೆಟ್ಗಳಿವೆ.